/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ : ಎಲ್ಲಾ ರೀತಿಯ ಸರ್ಕಾರಿ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಸೌಲಭ್ಯಗಳಿಗೆ ಆಧಾರ್ (Aadhaar) ಅಗತ್ಯವಾಗಿದೆ. ಈಗ ಸಾರಿಗೆ ಸಚಿವಾಲಯ (Transport Ministry) ಕೂಡ ಇದನ್ನು ಕಡ್ಡಾಯಗೊಳಿಸಲಿದೆ. ಸುದ್ದಿ ಪ್ರಕಾರ, ಆಧಾರ್ ಪರಿಶೀಲನೆ ಇಲ್ಲದೆ ಸಾರಿಗೆ ಸಚಿವಾಲಯದ 16 ರೀತಿಯ ಆನ್‌ಲೈನ್ ಮತ್ತು ಕಾಂಟಾಕ್ಟ್ ಲೆಸ್ ಸೇವೆಗಳು ಲಭ್ಯವಿರುವುದಿಲ್ಲ. ಆದ್ದರಿಂದ, ನೀವು ಇನ್ನೂ ಆಧಾರ್ ಕಾರ್ಡ್ ಅನ್ನು ಪರಿಶೀಲಿಸದಿದ್ದರೆ ವಿಳಂಬ ಮಾಡದೇ ಈಗಲೇ ಆ ಕೆಲಸ ಮಾಡಿ.

ಯಾವ ಸೌಲಭ್ಯಗಳ ಮೇಲೆ ಪರಿಣಾಮ ಬೀರುತ್ತದೆ:
ಸಾರಿಗೆ ಇಲಾಖೆಯ ಆನ್‌ಲೈನ್ ಸೌಲಭ್ಯಗಳ ಲಾಭವನ್ನು ಪಡೆಯಲು ನೀವು ಬಯಸಿದರೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಆದಷ್ಟು ಬೇಗ ಪರಿಶೀಲಿಸಿ. ಏಕೆಂದರೆ ಸಾರಿಗೆ ಸಚಿವಾಲಯ ಶೀಘ್ರದಲ್ಲೇ ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದೆ. ಲರ್ನಿಂಗ್ ಲೈಸೆನ್ಸ್  (Learning License), ಚಾಲನಾ ಪರವಾನಗಿ ನವೀಕರಣ (Renewal of Driving License), ವಿಳಾಸ (Address) ಬದಲಾವಣೆ, ನೋಂದಣಿಗಾಗಿ ಅರ್ಜಿಗಳ ಪ್ರಮಾಣಪತ್ರ (ಆರ್‌ಸಿ), ಅಂತರರಾಷ್ಟ್ರೀಯ ಚಾಲನಾ ಪರವಾನಗಿ (International Driving License), ವರ್ಗಾವಣೆಯ ಸೂಚನೆ, ವಾಹನದ ಮಾಲೀಕತ್ವದ ಬದಲಾವಣೆ ಸೇರಿದಂತೆ 16 ಬಗೆಯ ಆನ್‌ಲೈನ್ ಮತ್ತು ಕಾಂಟಾಕ್ಟ್ ಲೆಸ್ ಸೇವೆಗಳಿಗೆ ಸಾರಿಗೆ ಸಚಿವಾಲಯ ಆಧಾರ್ ಪರಿಶೀಲನೆಯನ್ನು ಕಡ್ಡಾಯಗೊಳಿಸಲಿದೆ.  

ಇದನ್ನೂ ಓದಿ - Online ನಲ್ಲಿ ಡ್ರೈವಿಂಗ್ ಲೈಸನ್ಸ್ ಗಾಗಿ ಹೇಗೆ ಅರ್ಜಿ ಸಲ್ಲಿಸಬೇಕು?

ಆಧಾರ್ ಕಾರ್ಡ್ ಇಲ್ಲದಿದ್ದಾಗ ಏನು ಮಾಡಬೇಕು?
ಇನ್ನೂ ಆಧಾರ್ ಕಾರ್ಡ್ (Aadhaar card) ಇಲ್ಲದಿದ್ದರೆ ಮೊದಲು ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕು. ಈಗ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ತಯಾರಿಸುವ ಸೌಲಭ್ಯವೂ ಪ್ರಾರಂಭವಾಗಿದೆ. ಇದರರ್ಥ ಈಗ ಜನರು ಆಧಾರ್ ಕೇಂದ್ರ ಮತ್ತು ಬ್ಯಾಂಕ್ ಜೊತೆಗೆ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ಮಾಡಿಸಲು ಸಾಧ್ಯವಾಗುತ್ತದೆ. ಉತ್ತರ ಪ್ರದೇಶದ ಸಹನ್‌ರನ್‌ಪುರ ಜಿಲ್ಲೆಯಲ್ಲಿನ ವ್ಯವಸ್ಥೆ ಪ್ರಕಾರ, ಪ್ರತಿ ಶನಿವಾರ ಅಂಚೆ ಕಚೇರಿಯಲ್ಲಿ ಜನರ ಆಧಾರ್ ಕಾರ್ಡ್ ತಯಾರಿಸಲಾಗುವುದು.

ಇದಲ್ಲದೆ ಸರ್ಕಾರದ ಮಾಹಿತಿಯನ್ನು ಸಹ ಜನರಿಗೆ ನೀಡಲಾಗುವುದು. ಅರ್ಜಿ ಸಲ್ಲಿಸಿದ ಆದರೆ ಇನ್ನೂ ಆಧಾರ್ ಕಾರ್ಡ್ ಸ್ವೀಕರಿಸದ ಇಂತಹ ಅರ್ಜಿದಾರರು ನೋಂದಣಿ ಸ್ಲಿಪ್ ತೋರಿಸುವ ಮೂಲಕ ಲಾಭ ಪಡೆಯಲು ಸಹ ಸಾಧ್ಯವಾಗುತ್ತದೆ.

ಇದನ್ನೂ ಓದಿ - ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡಲು ಇಲ್ಲಿದೆ ಸುಲಭ ಮಾರ್ಗ

ಜನರಿಂದ ಸಲಹೆಗಳನ್ನು ಪಡೆಯಲಾಗುತ್ತದೆ :
ಈ ಕರಡು ಆದೇಶದ ಬಗ್ಗೆ ಸಾರಿಗೆ ಸಚಿವಾಲಯವು ಜನರಿಂದ ಸಲಹೆಗಳನ್ನು ಕೋರಿರುವುದರಿಂದ ಹೊಸ ವ್ಯವಸ್ಥೆಯನ್ನು ಉತ್ತಮವಾಗಿ ಕಾರ್ಯಗತಗೊಳಿಸಬಹುದು. ಸಚಿವಾಲಯದ ಪ್ರಕಾರ, ಆಧಾರ್ ಪರಿಶೀಲನೆಗೆ ಒಳಗಾಗಲು ಇಷ್ಟಪಡದವರು, ಈ ಸೇವೆಗಳನ್ನು ಪಡೆಯಲು ಅವರು ವೈಯಕ್ತಿಕವಾಗಿ ಸಾರಿಗೆ ಇಲಾಖೆ ಕಚೇರಿಗೆ ಹೋಗಬೇಕಾಗುತ್ತದೆ. ಆದ್ದರಿಂದ ಮನೆಯಲ್ಲಿಯೇ ಸೌಲಭ್ಯಗಳ ಲಾಭ ಪಡೆಯಲು ಆಧಾರ್ ಕಾರ್ಡ್‌ಗೆ ನೋಂದಾಯಿಸಿಕೊಳ್ಳುವುದು ಉತ್ತಮ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Transport Ministry towards big change, increase the importance of Aadhaar card
News Source: 
Home Title: 

ದೊಡ್ಡ ಬದಲಾವಣೆಯತ್ತ Transport Ministry, ಈ ಕೆಲಸ ಮಾಡಿದರಷ್ಟೇ ವಾಹನ ಚಲಾಯಿಸಲು ಸಾಧ್ಯ

ದೊಡ್ಡ ಬದಲಾವಣೆಯತ್ತ Transport Ministry, ಈ ಕೆಲಸ ಮಾಡಿದರಷ್ಟೇ ವಾಹನ ಚಲಾಯಿಸಲು ಸಾಧ್ಯ
Caption: 
Transport Ministry towards big change
Yes
Is Blog?: 
No
Tags: 
Facebook Instant Article: 
Yes
Highlights: 

ಆಧಾರ್ ಕಾರ್ಡ್ ಪರಿಶೀಲನೆ ಅತ್ಯಗತ್ಯ

ಸಾರಿಗೆ ಸಚಿವಾಲಯದಲ್ಲಿ ಆಧಾರ್ ಇಲ್ಲದೆ ನಡೆಯಲ್ಲ ಯಾವುದೇ ಕೆಲಸ

ಸಾರಿಗೆ ಸಚಿವಾಲಯ ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದೆ

Mobile Title: 
ದೊಡ್ಡ ಬದಲಾವಣೆಯತ್ತ Transport Ministry, ಈ ಕೆಲಸ ಮಾಡಿದರಷ್ಟೇ ವಾಹನ ಚಲಾಯಿಸಲು ಸಾಧ್ಯ
Yashaswini V
Publish Later: 
Yes
Publish At: 
Thursday, February 11, 2021 - 08:33
Created By: 
Yashaswini V
Updated By: 
Yashaswini V
Request Count: 
3
Is Breaking News: 
No